ಶನಿವಾರ, ಡಿಸೆಂಬರ್ 20, 2008

ಸಿಕ್ಕೇಬಿಟ್ಟಿತೆ ಭೂಮಿಯಾಚೆಗಿನ ನೀರು?!


ಭೂಮಿಯನ್ನು ಬಿಟ್ಟು ವಿಶ್ವದ ಬೇರೆ ಕಡಗಳಲ್ಲಿ ನೀರು ಹುಡುಕುತ್ತ ಹೊರಟ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲು ಕಾಲಿಟ್ಟಾಗ ಏನು ಅನ್ನಿಸಿರಬಹುದು? ಬರಡು ನೆಲ, ಜೀವದ ಸೆಲೆಯೂ ಇಲ್ಲದ ಪರಿಸರ. ಸದಾ ಕಗ್ಗತ್ತಲ ಆಕಾಶ. ಲಕ್ಷಾಂತರ ಕಿಲೋಮೀಟರ್‌ಗಳನ್ನು ದಾಟಿ ಇದಕ್ಕಾಗೇ ನಾವು ಚಂದ್ರನ ಬಳಿಗೆ ಬಂದೆವ ಎಂದು ನಿರಾಸೆಯಾಯಿತೋ?! ಬಹುಷಃ ಆಗಿರಲಾರದು. ಮನುಷ್ಯನಿಗೆ ಹಾಗೆ ನಿರಾಸೆ ಆಗುವುದೇ ಇಲ್ಲ. ಮಹಾತ್ವಾಕಾಂಕ್ಷಿ ಮನುಷ್ಯ ತನಗೆ ಬೇಕಿದ್ದನ್ನು ಖಂಡಿತಾ ದಕ್ಕಿಸಿಕೊಳ್ಳುತ್ತಾನೆ. ಚಂದ್ರನಲ್ಲಿ ನೀರನ್ನು ಅರಸುತ್ತ ಭಾರತವೂ ಚಂದ್ರಯಾನ ಮಾಡುವಂತಾಗಿ, ಮಂಗಳದ ಮೇಲೂ ಕಾಲಿಟ್ಟು, ಅಲ್ಲೆಲ್ಲ ಹುಡುಕಾಡಿ, ತಡಕಾಡಿ ಕೊನೆಗೂ ಭೂಮಿಯಾಚೆಗಿನ ನೀರನ್ನು ಹುಡುಕೇಬಿಟ್ಟಿದ್ದಾನೆ!

ಹೌದು. ಇದು ನಿಜಕ್ಕೂ ಭೂಮಿ ಬಾಯಿ ತೆರೆಯುವಂಥ ಸುದ್ದಿ. ಭೂಮಿಯಾಚೆ ನೀರನ್ನು ಕಂಡುಹಿಡಿದು ಅದನ್ನು ಪಡೆಯುವತ್ತ ಆಗಲೇ ಮನುಷ್ಯ ದಾಪುಗಾಲು ಇಡಲು ಪ್ರಾರಂಭಿಸಿಯೇ ಬಿಟ್ಟಿದ್ದಾನೆ!

ಅಮೆರಿಕಾದ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಆಫ್ ರೇಡಿಯೋ ಆಸ್ಟ್ರಾನಮಿಯ ಸಂಶೋಧನಾ ವಿದ್ಯಾರ್ಥಿ ವೈಲೆಟ್ ಇಂಪೆಲ್ಲಿಸರಿ ನೇತೃತ್ವದ ತಂಡ ೧೦೦ ಮೀಟರ್ ಎಫೆಲ್ಸ್‌ಬರ್ಗ್ ರೇಡಿಯೋ ದೂರದರ್ಶಕ ಯಂತ್ರದ ಸಹಾಯದಿಂದ ಭೂಮಿಯಿಂದ ಸುಮಾರು ೧೧.೧ ಬಿಲಿಯನ್ ಜ್ಯೋತಿವರ್ಷಗಳ ದೂರದ ಅಂತರಿಕ್ಷದಲ್ಲಿ ತೇಲುತ್ತಿರುವ ನೀರಿನ ಸಮುಚ್ಛಯವನ್ನು ಶೋಧಿಸಿದ್ದಾರೆ.

ಈ ಶೋಧನೆಯ ಬಗ್ಗೆ ತಿಳಿಯುವ ಮುನ್ನ, ಇದಕ್ಕೆ ಪೂರಕವಾದ ಮತ್ತೊಂದು ವಿಚಾರವನ್ನು ತಿಳಿದರೆ ಉತ್ತಮ. ನಾವು ನೋಡುತ್ತಿರುವ ಸೂರ್ಯನಂತಹ ನಕ್ಷತ್ರಗಳು ಅಂತರಿಕ್ಷದಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಸೂರ್ಯನಿಗೆ ಹೋಲಿಸಿದರೆ ಗಾತ್ರದಲ್ಲಿ ಸಾವಿರ ಪಟ್ಟು ದೊಡ್ಡದಾದ ನಕ್ಷತ್ರಗಳು ಸಾವಿರಾರಿವೆ. ಇಂತಹ ಸೂರ್ಯನಿಗಿಂತ ದೊಡ್ಡ ನಕ್ಷತ್ರಗಳು ತನ್ನಲ್ಲಿರುವ ಜಲಜನಕವನ್ನು ಉರಿಸುತ್ತ - ಉರಿಸುತ್ತ, ಹಳದಿಕಾಯನಾಗಿ, ಶ್ವೇತಕಾಯನಾಗಿ, ನೀಲಿಕಾಯನಾಗಿ ಹಲವು ಅವತಾರಗಳನ್ನು ಎತ್ತುತ್ತಾ ಸಾಗುತ್ತದೆ. ಹೀಗೆ ಒಂದು ದಿನ ತನ್ನಲ್ಲಿರುವ ಜಲಜನಕವೆಲ್ಲ ಮುಗಿದ ಮೇಲೆ ಅದು ಗಾತ್ರದಲ್ಲಿ ಕುಬ್ಜನಾಗುತ್ತ, ಕೃಷ್ಣಕಾಯವಾಗಿ ಪರಿವರ್ತಿತಗೊಳ್ಳುತ್ತದೆ. ಅಂದರೆ ಕಪ್ಪು ಬಣ್ಣದ್ದು ಎಂದರ್ಥ. ಈ ಕೃಷ್ಣಕಾಯ ಎಷ್ಟು ಸಾಂದ್ರತೆಯನ್ನು ಹೊಂದಿರುತ್ತದೆ ಎಂದರೆ ತನ್ನ ಆಕಾರವನ್ನು ಕಳೆದುಕೊಂಡು ಕೇವಲ ಒಂದು ಗುಂಡು ಸೂಜಿಯ ತಲೆಯ ಗಾತ್ರಕ್ಕೆ ಬಂದಿರುವ ನಕ್ಷತ್ರ, ತೂಕದಲ್ಲಿ ಕೋಟಿ ಭೂಮಿಗಳನ್ನು ತೂಗುತ್ತದೆ. ಈ ಕಾಯದ ಗುರುತ್ವಾಕರ್ಷಣ ಶಕ್ತಿ ಎಷ್ಟು ಅಗಾಧವಾಗಿರುತ್ತದೆ ಎಂದರೆ, ಬೆಳಕೂ ಇದರಿಂದ ತಪ್ಪಿಸಿಕೊಂಡು ಹೋಗಲಾರದು. ಅಂತರಿಕ್ಷದ ಈ ಕೃಷ್ಣಕಾಯ ತನ್ನದೇ ಆಯಸ್ಕಾಂತ ಬಲದಿಂದ ಚಲನೆಗೆ ಒಳಪಟ್ಟು ಸಂಚಾರ ಮಾಡುತ್ತ, ಭೂಮಿಯ ಆಸುಪಾಸು ಹೋಗಿಯೇ ಭೂಮಿಯಲ್ಲಿ ಪ್ರಳಯಗಳಾಗಿ ಶೀತಯುಗ, ಉಷ್ಣಯುಗ ಎದುರಾದವು ಎಂಬ ವಾದವೇ ಇದೆ. ಈ ಮಹತ್ತರ ಅನ್ವೇಷಣೆಯನ್ನು ಮಾಡಿದ್ದಕ್ಕಾಗಿಯೇ ಭಾರತದ ಜಗದೀಶ್ ಚಂದ್ರಭೋಸ್ ಅವರಿಗೆ ನೊಬೆಲ್ ಪರ್ಯಾಯ ಪಾರಿತೋಷಕ ಪ್ರಶಸ್ತಿ ಲಭಿಸಿದ್ದು!

ಈ ಕೃಷ್ಣಕಾಯಗಳು ಜೀವಂತವಾಗಿ ಇರಬೇಕಾದರೂ ಅದಕ್ಕೆ ಆಹಾರ ಬೇಕು. ಹಾಗಾಗಿ ತನ್ನ ಸುತ್ತಮುತ್ತಲಿನ ಅಂತರಿಕ್ಷದಲ್ಲಿನ ಅನಿಲ ಮೋಡಗಳಿಂದ ಅನಿಲಗಳನ್ನು ಸೆಳೆದುಕೊಳ್ಳುತ್ತದೆ. ಅಂತಹ ಒಂದು ಅತಿ ದೊಡ್ಡ ಅನಿಲ ಮೋಡದಲ್ಲೇ ಈಗ ವಿಜ್ಞಾನಿಗಳು ನೀರನ್ನು ಪತ್ತೆ ಹಚ್ಚಿರುವುದು.

ಈ ಮೋಡವನ್ನು ಕ್ವಾಸ್ಸರ್ ಎಂಜಿ ಜೆಒ೪೧೪೦-೫೩೪ ಎಂಬ ಹೆಸರಿಡಲಾಗಿದೆ. ೧೦೦ ಮೀಟರ್ ವಿಸ್ತೀರ್ಣದ ಬೂದು ಗಾಜಿರುವ ರೇಡಿಯೋ ದೂರದರ್ಶಕ ಯಂತ್ರವನ್ನು ಹಿಡಿದು ೧೧.೧ ಬಿಲಿಯನ್ ಜ್ಯೋತಿವರ್ಷಗಳ ದೂರದ ಅನಿಲ ಮೋಡವನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಅದಕ್ಕಾಗಿ ವಿಜ್ಞಾನಿಗಳು ಭೌತಶಾಸ್ತ್ರದ ಸರಳ ನಿಯಮವನ್ನು ಬಳಸಿಕೊಂಡರು. ಮೊಡದ ಹಿಂದೆ ಕಾಣುವ ನಕ್ಷತ್ರ ಪುಂಜವನ್ನೇ ದೊಡ್ಡ ಮಸೂರದಂತೆ ಬಳಸಿಕೊಂಡು ಅದರಿಂದ ಹೊಮ್ಮುವ ಬೆಳಕಿನ ಸಹಾಯದಿಂದ ಅನಿಲ ಮೋಡವನ್ನು ಪತ್ತೆ ಹಚ್ಚಿದರು. ೫೮೦ ದಿನಗಳ ಅತಿ ಕ್ಷೀಣ ಬೆಳಕಿನ ಸೆಲೆಯೊಂದನ್ನು ಹಿಡಿದುಕೊಂಡು ದೂರಕರ್ಶಕಕ್ಕೆ ಕಣ್ಣು ಹಾಕಿಕೊಂಡು ಕೂರುವುದು ಸಾಮಾನ್ಯದ ಮಾತೆ.

ಅಂತೂ ಇಂತು ಮೋಡದ ಅನ್ವೇಷಣೆಯಾಯಿತು. ಇನ್ನು ಅದರಲ್ಲಿ ನೀರಿದಿಯೋ ಇಲ್ಲವೋ ಇಲ್ಲವೋ ಎಂದು ನಿಖರವಾಗಿ ಹೇಗೆ ಹೇಳುವುದು. ಅದಕ್ಕಾಗಿ ರಸಾಯನಶಾಸ್ತ್ರ ಅನುಕೂಲಕ್ಕೆ ಬರುತ್ತದೆ. ಪ್ರತಿಯೊಂದು ಅನಿಲಕ್ಕೂ ಅದರದೇ ಆದ ಗುಣಲಕ್ಷಣವಿರುತ್ತದೆ. ಅದರ ಅಣು ಅಣುವೂ ಅದನ್ನು ಸಾರಿ ಸಾರಿ ಹೇಳುತ್ತದೆ. ಇದನ್ನೇ ನಾವು ಅಣು ಬೀಜಶಾಸ್ತ್ರ ಎಂದು ಕರೆಯುತ್ತೇವೆ. ಆಮ್ಲಜನಕಕ್ಕೇ ಒಂದು ಗೋಚರ ಲಕ್ಷಣ, ಜನಜನಕಕ್ಕೇ ಒಂದು ಲಕ್ಷಣ, ಹೀಗೆ ನೀರಿನ ರಾಸಾಯನಿಕ ಹೆಸರಾದ ಎಚ್೨ಒಗೂ ಒಂದು ಲಕ್ಷಣವಿರುತ್ತದೆ. ಅದನ್ನು ಅಧ್ಯಯನ ಮಾಡಿದ ವೈಲೆಟ್ ಮತ್ತು ಜಾನ್ ಮ್ಯಾಕ್‌ಕೀನ್ ಅನಿಲ ಮೋಡದಲ್ಲಿ ನೀರಿರುವುದಾಗಿ ಪತ್ತೆ ಹಚ್ಚಿದರು.

ವಿಶ್ವ ಸೃಷ್ಟಿಯಾಗಿ ಇಂದಿಗೆ ೧೩.೭ ಬಿಲಿಯನ್ ವರ್ಷಗಳಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಿಗ್ ಬ್ಯಾಂಗ್ (ಮಹಾಸ್ಪೋಟ) ಆಗಿ ಸರಿಸುಮಾರು ೨.೮ ಬಿಲಿಯನ್ ವರ್ಷದಲ್ಲಿ ಈ ನೀರು ಇರುವ ಅನಿಲ ಮೋಡ ಸೃಷ್ಟಿಯಾಗಿದೆ ಎಂದು ಪತ್ತೆ ಹಚ್ಚಲಾಗಿದೆ. ಇದನ್ನು ಕಂಡು ಹಿಡಿಯುವುದೂ ಸುಲಭ. ಆ ಅನಿಲ ಮೋಡದಿಂದ ಹರಟ ಬೆಳಕಿನ ಕಿರಣ ಭೂಮಿಯ ನಮ್ಮ ವಿಜ್ಞಾನಿಗಳ ೧೦೦ ಮೀಟರ್ ದೂರದರ್ಶಕಕ್ಕೆ ಬಂದು ತಗುಲಲು ೧೧.೧ ಬಿಲಿಯನ್ ಜ್ಯೋತಿವರ್ಷಗಳಾಗಿರುತ್ತದೆ (ಬೆಳಕಿಗೆ ೧೧.೧ ವರ್ಷ). ಅಂದರೆ ಅಷ್ಟು ವರ್ಷ ಹಳೆಯದಾದ, ಇನ್ನೂ ಬಳಕೆಯಾಗದೆ ಹಾಗೆಯೇ ಉಳಿದಿರುವ ನೀರು ಇನ್ನೂ ಉಳಿದಿದೆ ಎಂದಂತಾಯಿತು.

ಈ ಸಂಶೋಧನೆ ಇನ್ನೂ ಹಲವು ಸಂಶೋಧನೆಗಳಿಗೆ ದಾರಿ ತೋರಿಸಿದೆ. ಇದುವರಗೆ ಭೂಮಿ ಬಿಟ್ಟು ಆಚೆಕಡೆ ನೀರು ಇರುವುದೋ ಇಲ್ಲವೋ ಎಂಬ ಅನುಮಾನಕ್ಕೆ ಈಗ ತೆರೆ ಬಿದ್ದಿದೆ. ನೀರು ಭೂಮಿಯಾಚೆಗೂ ಇದೆ. ಈಗ ಎಲ್ಲೋ ೧೧.೧ ಬಿಲಿಯನ್ ಜ್ಯೋತಿವರ್ಷಗಳ ದೂರದಲ್ಲಿ ನೀರಿನ ಸೆಲೆ ಸಿಕ್ಕಿದೆ ಎಂದರೆ ಇನ್ನೂ ಹತ್ತಿರದಲ್ಲಿ ಮನುಷ್ಯನ ಕಗೆಟುಕುವ ದೂರದಲ್ಲೂ ನೀರು ಇದ್ದೇ ಇದೆ ಎನ್ನುವುದೂ ತಳ್ಳಿಹಾಕಲಾರದ ಸಂಗತಿಯಾಗಿದೆ. ಹಾಗಾಗಿ ಈ ಸಂಶೋಧನೆಯು ಅಂತರಿಕ್ಷವನ್ನು ಮತ್ತಷ್ಟು ಆಳವಾಗಿ ಸಂಶೋಧಿಸುವ, ಆಳವಾಗಿ ಬಗೆದು ನೋಡುವ ಮಾನವನ ಚಪಲವನ್ನು ಹೆಚ್ಚಿಸಿದೆ.

ವಿಜ್ಞಾನಿಗಳ ಪ್ರಕಾರ ಈ ಅನಿಲ ಮೋಡವು ಸೂರ್ಯನಿಗಿಂತ ೧೦ ಸಾವಿರ ಪಟ್ಟು ದೊಡ್ಡದು. ಆದರೆ ಸೂರ್ಯನಷ್ಟೇ ಶಾಖವಿರುವ ಲಕ್ಷಣಗಳನ್ನು ತೋರಿಸಿದೆ. ಆದರೆ ವಿಜ್ಞಾನಿಗಳ ವಾದವನೆಂದರೆ, ಸೂರ್ಯನಿಂದ ನಾವು ದೂರ ಸರಿದಂತೆ ಹೇಗೆ ಉಷ್ಣಾಂಶ ಕಡಮೆಯಾಗುವುದೋ, ಹಾಗೆಯೇ ಈ ಅನಿಲ ಮೋಡದಿಂದ ದೂರದಲ್ಲಿ ತಂಪಾದ ನೀರೂ ಸಿಗಬಹುದು. ನೀರು ಆವಿಯ ರೂಪದಲ್ಲಿದ್ದು, ಅದನ್ನು ದ್ರವ ರೂಪಕ್ಕೆ ಪರಿವರ್ತಿಸಿಕೊಳ್ಳುವುದು ದೊಡ್ಡದಲ್ಲ. ಆದರೆ ಸವಾಲಿರುವುದು ಅದರಲ್ಲಲ್ಲ. ೧೧.೧ ಬಿಲಿಯನ್ ಜ್ಯೋತಿವರ್ಷ ದೂರದ ಜಾಗವನ್ನು ತಲುಪುವುದು. ಒಂದು ಜ್ಯೋತಿವರ್ಷವೆಂದರೆ ಬೆಳಕು ೧ ಸೆಂಕೆಂಡಿಗ ೩ ಲಕ್ಷ ಕಿಮಿಗೆ ೧ ವರ್ಷ ಕಾಲ ಸಾಗುವ ದೂರ. ಈ ವೇಗದಲ್ಲಿ ಬೆಳಕಿನ ವೇಗದಲ್ಲಿ ಈ ಅನಿಲ ಮೋಡವನ್ನು ತಲುಪಿದರೂ ನಮಗೆ ೧೧.೧ ವರ್ಷಗಳು ಹಿಡಿಯುತ್ತವೆ. ಅಷ್ಟು ವೇಗವಾಗಿ ಚಲಿಸುವ ವೇಗದ ವಾಹನವನ್ನು ಮನುಷ್ಯನಿಗೆ ಇನ್ನೂ ಶೋಧಿಸಲು ಸಾಧ್ಯವಾಗಿಲ್ಲ. ಅಲ್ಲದೆ ಈ ವೇಗದಲ್ಲಿ ಸಾಗಲು ಮನುಷ್ಯನ ದೇಹ ಸಹಕರಿಸುವುದೂ ಇಲ್ಲ. ಕೇವಲ ಶಬ್ದದ ವೇಗ (ಗಂಟೆಗೆ ೧೨೩೫ ಕಿಮಿ) ದಲ್ಲಿ ಸಾಗುವ ವಿಮಾನಗಳಿದ್ದು, ಅವುಗಳಲ್ಲಿ ಸಾಗುವಾಲೆ ಹಲವು ದೈಹಿಕ ತೊಂದರೆಗಳಾಗುತ್ತವೆ. ಹಾಗಾಗಿ ಬೆಳಕಿನ ವೇಗವನ್ನೂ ಮೀರಿಸಬಲ್ಲ ತಂತ್ರಜ್ಞಾನದ ಶೋಧನೆ, ಹಾಗೂ ದೇಹಕ್ಕೆ ಯಾವ ತೊಂದರೆಯೂ ಇಲ್ಲದಂತ ಮತ್ತೊಂದು ತಂತ್ರಜ್ಞಾನದ ಶೋಧನೆಯಾದರೆ ಮಾತ್ರ ಇದಕ್ಕೆ ಉತ್ತರ ಸಿಕ್ಕಂತೆ.


ಇದಕ್ಕೆ ಇನ್ನೂ ಒಂದು ಪರಿಹಾರವಿದೆ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ ಮನೋವೇಗದ ಉಲ್ಲೇಖವನ್ನು ಮಾಡುತ್ತಾರೆ. ಲಕ್ಷ್ಮಣನನ್ನು ಬದುಕಿಸಲು ಹಿಮಾಲಯದಿಂದ ಲಂಕಗೆ ಹಾರಿ ಸಂಜೀವಿನಿ ದ್ರವವನ್ನು ತರಲು ಹನುಮಂತನಿಗೆ ರಾಮನಿಗೆ ಹೇಳುತ್ತಾನೆ. ಆದರೆ ಹನುಮಂತ ಗಾಳಿಯಲ್ಲಿ ಹಾರಿ ಹೋಗಿ ತರುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದೆ. ಹಾಗಾಗಿ ಮನೋವೇಗದಲ್ಲಿ ಸಾಗಿ ಸಂಜೀವಿನಿ ತರಲು ಹೇಳುತ್ತಾನೆ. ಹನುಮಂತ ಕ್ಷಣಾರ್ಧದಲ್ಲಿ ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಉಳಿಸುತ್ತಾನೆ. ಅಂದರೆ, ಭಾರತೀಯ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವ ವೈಜ್ಞಾನಿಕ ಸತ್ಯವೊಂದು ಈಗ ಬಳಕಯಾಗಬಲ್ಲದು. ಮನೋವೇಗ ಇರುವುದು ನಿಜವೇ ಆಗಿದ್ದಲ್ಲಿ ಅನಿಲ ಮೋಡದ ಬಳಿಗೆ ಸಾಗುವುದು ದೊಡ್ಡದೇನಲ್ಲ. ಒಟ್ಟಿನಲ್ಲಿ ಮನುಕುಲದ ಶ್ರೇಯಸ್ಸಿಗಾಗಿ ನೀರಿನ ಸೆಲೆಯ ಬಳಿ ಸಾಗುವುದು ಕ್ಷಿಪ್ರವಾಗಿ ಆಗಬೇಕಿದೆ.

ಶನಿವಾರ, ಡಿಸೆಂಬರ್ 6, 2008

ಮರೆತೇನೆಂದರೆ ಮರೆಯಲಿ ಹ್ಯಾಂಗ!



ಕಲಿತದ್ದನ್ನು ಮಿದುಳು ಎಂದಿಗೂ ಮರೆಯದು...

ಎಷ್ಟೋ ವರ್ಷಗಳ ಹಿಂದೆ ನೀವೊಂದು ಸ್ಥಳಕ್ಕೆ ಭೇಟಿ ನೀಡಿರುತ್ತೀರಿ. ಅಲ್ಲಿ ನಿಮಗೆ ಒಬ್ಬ ವ್ಯಕ್ತಿ ಪರಿಚಯವಾಗಿರುತ್ತಾರೆ. ನಂತರ ಕೆಲಸ ಮುಗಿದ ಮೇಲೆ ಮರಳಿ ಬಂದು ನಿಮ್ಮ ಜೀವನ ನೀವು ನೋಡಿಕೊಂಡಿರುತ್ತೀರಿ. ಅಲ್ಲಿಗದು ಮುಗಿದ ವಿಚಾರ. ೧೦ ವರ್ಷ ಕಳೆಯುತ್ತದೆ. ಆ ವ್ಯಕ್ತಿ ಏಕೋ ನೆನಪಿಗೆ ಬರುತ್ತಾರೆ. ಆದರೆ ಹೆಸರೇ ನೆನಪಿಗೆ ಬರದು! ಏನೋ ಮಾಡುತ್ತಾ ಕುಳಿತಿದ್ದಾಗ ಹೆಸರು ಪಕ್ಕನೆ ನೆನಪಾಗುತ್ತದೆ. ಅರೆರೆ! ಇದು ಹೇಗೆ ಸಾಧ್ಯ? ಎಲ್ಲಿಂದ ಬಂತು ಈ ಹೆಸರು. ನಿಮಗೇ ಆಶ್ಚರ್ಯವಾಗುತ್ತದೆ!

ಈ ಅನುಭವ ಒಂದಲ್ಲಾ ಒಂದು ಸಂದರ್ಭದಲ್ಲಿ ಎಲ್ಲರಿಗೂ ಆಗೇ ಆಗಿರುತ್ತದೆ. ಮರೆತೇ ಹೋದೆವು ಎಂದು ನಾವಂದು ಅಂದುಕೊಂಡಿದ್ದ ಸಂಗತಿ ನಿಜಕ್ಕೂ ಮರೆತು ಹೋಗಿರುವುದಿಲ್ಲ. ನೆನಪಿನ ಯಾವುದೋ ಒಂದು ಪದರದಲ್ಲಿ ಹಾಗೇ ಉಳಿದಿರುತ್ತದೆ. ಹೌದು. ಮಿದುಳು ಒಮ್ಮೆ ಕಲಿತದ್ದನ್ನು, ನೋಡಿದ್ದನ್ನು, ಕೇಳಿದ್ದನ್ನು, ಓದಿದ್ದನ್ನು ಎಷ್ಟೇ ವರ್ಷವಾಗಲಿ, ಆ ವಿಷಯ ಎಷ್ಟೆ ಅಮುಖ್ಯವಾಗಲಿ, ಅದನ್ನು ಮರೆಯುವುದೇ ಇಲ್ಲ. ತನ್ನ ಸಾಗರದಾಳದ ನೆನಪಿನಿಂದ ಆಚೆ ತಂದೇ ತರುತ್ತದೆ. ಮಿದುಳಿನ ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲವೂ ಶೇಖರವಾಗಿರುತ್ತದೆ!

ಮನುಷ್ಯನಿಗೊಬ್ಬನಿಗೇ ಈ ಅದ್ಭುತ ಶಕ್ತಿ ಇರುವುದು. ಕಲಿಯುವ, ನೆನಪಲ್ಲಿ ಇಟ್ಟುಕೊಳ್ಳುವ ಮಹತ್ ಶಕ್ತಿ ನಮಗೆ ಮಾತ್ರ ಇರುವುದು. ಈ ವಿಚಾರವನ್ನು ಪ್ರಾಣಿಗಳು ಮಾಡುವುದಿರಲಿ. ಕನಸಲ್ಲೂ ಕಲ್ಪಿಸಿಕಳ್ಳಲು ಸಾಧ್ಯವಿಲ್ಲ. ಆದರೆ ಆಶ್ಚರ್ಯಕರ ಸಂಗತಿ ಇದಲ್ಲ. ನೆನಪಿನ ಕ್ಷೇತ್ರದಲ್ಲಿ ನಾವೀಗ ಕೇವಲ ಮೊದಲ ಮೆಟ್ಟಿಲನ್ನು ಮಾತ್ರ ಏರಿದ್ದೇವೆ. ಹತ್ತಬೇಕಿರುವುದು ಇನ್ನು ಕೋಟಿ ಮೆಟ್ಟಿಲಿದೆ. ಅಂದರೆ ನಾವು ಮಿದುಳಿನ ಈ ಒಂದು ಮೆಟ್ಟಿಲು ಶಕ್ತಿಯನ್ನು ಮಾತ್ರ ಬಳಸಿಕೊಂಡಿದ್ದೇವೆ.

ಮರೆವು ಎನ್ನುವುದು ಸುಳ್ಳು!: ನರಶಾಸ್ತ್ರ ತಜ್ಞರು ಹೊಸ ಸಂಶೋಧನೆಯನ್ನು ಈಗ ತಾನೆ ಮಾಡಿದ್ದಾರೆ. ಅವರ ಪ್ರಕಾರ ಮರೆವು ಎನ್ನುವುದು ಸುಳ್ಳು. ಮರೆವು ಕೇವಲ ತಾತ್ಕಾಲಿಕ. ನಮಗೆ ಬೇಕಾದ ನೆನಪನ್ನು ನಾವು ಬೇಕಾದಾಗ ಹೊರ ತೆಗೆಯಬಹುದು. ತಜ್ಞರು ನೆನಪಿಗೆ ಹೊಸ ವೈಜ್ಞಾನಿಕ ವ್ಯಾಖ್ಯಾನ ನೀಡಿದ್ದಾರೆ. ಮಿದುಳು ಯಾವುದೇ ಹೊಸ ಸಂಗತಿಯನ್ನು ಗ್ರಹಿಸಿದಾಗ ಮಿದುಳಲ್ಲಿನ ಒಂದು ಜೀವಕೋಶದಲ್ಲಿ ಘರ್ಷಣೆ ಉಂಟಾಗಿ, ಅದರಲ್ಲಿ ನೆನಪಿನ ಹೊಸ ಹೆಜ್ಜೆ ಮೂಡುತ್ತದೆ. ಅದರ ಅಗತ್ಯ ಇರುವವರೆಗೂ ಅದು ಚಾಲ್ತಿಯಲ್ಲಿದ್ದು, ನಂತರ ಆ ಜೀವಕೋಶ ನಿದ್ರೆಗೆ ಹೋಗುತ್ತದೆ. ಆ ನಿದ್ರೆಗೆ ಹೋಗುವ ಪ್ರಕ್ರಿಯೆಯೇ ಮರೆವು. ಆ ಜೀವಕೋಶವನ್ನು ಬಡಿದೆಬ್ಬಿಸುವುದೇ ನೆನಪು!

ಪ್ರಸಂಗ ೧: ಕಿಟಕಿಯೊಳಗೆ ನೊಣವೊಂದು ಸೇರಿಕೊಂಡಿರುತ್ತದೆ. ಅದು ಆಚೆ ಹೋಗಲು ಕಷ್ಟ ಪಡುತ್ತಿರುತ್ತದ. ಆದರೆ ಮಧ್ಯೆ ಇರುವ ಗಾಜಿನ ತಡೆ ಅದಕ್ಕೆ ಕಾಣುತ್ತಿರುವುದಿಲ್ಲ. ಸತತ ಪ್ರಯತ್ನ ಮಾಡಿದ ಅದಕ್ಕೆ, ತಪ್ಪಿನ ಅರಿವಾಗಿ ಬೇರೆ ದಾರಿ ಹುಡುಕುತ್ತದೆ. ಕಿಂಡಿಯ ಮೂಲಕ ಆಚೆ ಹೋಗುತ್ತದೆ. ಮನುಷ್ಯನೂ ಹೀಗೇ ಮಾಡುತ್ತಾನೆ. ಅವನಿಗೆ ದೊಡ್ಡ ಗಾಜಿನ ಬಾಗಿಲಲ್ಲಿ ಗಾಜಿರುವುದು ಕಾಣದೆ ಹಣ ಒಡೆದುಕೊಂಡಾಗ ತಪ್ಪಿನ ಅರಿವಾಗಿ ಎಚ್ಚರಿಕೆಯಿಂದ ಹೋಗುತ್ತಾನೆ. ಇದು ಇಷ್ಟಕ್ಕೆ ಸೀಮಿತವಾಗದೆ, ಮುಂದೆ ಬೈಕ್‌ನಲ್ಲಿ ಹೋಗುವಾಗ, ಸ್ಕೈ ಮಾಡುವಾಗ, ಮೆಟ್ಟಿಲು ಇಳಿಯುವಾಗ ಸಹಾಯಕ್ಕೆ ಬಂದು ತಪ್ಪುಗಳಾಗದಂತೆ ಎಚ್ಚರಿಕ ವಹಿಸುತ್ತಾನೆ. ಅಂದರೆ ಮನುಷ್ಯನಿಗೆ ಎಲ್ಲ ಕ್ಷೇತ್ರಗಳಲ್ಲೂ ಅನುಭವ ಬೇಕಿಲ್ಲ. ಒಂದರ ಅನುಭವವೇ ಮತ್ತೊಂದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ನೆನಪು ಬಹಳಷ್ಟು ಸಂದರ್ಭಗಳಲ್ಲಿ ಕೇವಲ ಹೋಲಿಕೆಯಾಗಿ ಮಾತ್ರ ಸಹಾಯ ಮಾಡುತ್ತದೆ ಎನ್ನುವುದು ವಿಜ್ಞಾನಿಗಳ ವಾದ.

ಪ್ರತಿಯೊಂದು ಹೊಸ ವಿಚಾರವನ್ನು ಮಿದುಳು ಕಲಿತುಕೊಂಡಾಗ ಮಿದುಳಿನಲ್ಲಿ ಹೊಸ ಪದರವೊಂದು ಸೃಷ್ಟಿಯಾಗುತ್ತದೆ. ನೆನಪುಗಳು ಸೇರುತ್ತಾ ಹೋದಂತೆ ಈ ಪದರಗಳು ಹೆಚ್ಚಾಗಿ, ಒಂದಕ್ಕೊಂದು ನೇಯ್ದುಕೊಳ್ಳುತ್ತಾ, ನೆನಪಿನ ಸಂಕೀರ್ಣವೇ ಸೃಷ್ಟಿಯಾಗುತ್ತದಂತೆ. ಹಾಗಾಗಿ ಒಂದು ಮಗುವಿನ ಮಿದುಳನ್ನು ನೋಡಿದಾಗ ಕಡಮೆ ನೆರಿಗೆಗಳೂ, ವಯಸ್ಕರ ಮಿದುಳನ್ನು ನೋಡಿದಾಗ ಹೆಚ್ಚು ನೆರಿಗೆಗಳು ಗೋಚರಿಸುತ್ತವೆ.

ವಿಜ್ಞಾನಿಗಳ ಪ್ರಕಾರ ಈ ಪರದೆಗಳ ಮಧ್ಯೆ ಸಂಪರ್ಕ ಇರುತ್ತದೆ. ಈ ಸಂಪರ್ಕ ಹೆಚ್ಚುತ್ತಾ ಹೋಗಿ, ನೆನಪಿನ ಜೀವಕೋಶಗಳು ಪರದೆಯನ್ನು ಬಿಟ್ಟು ಆಚೆ ಬರುತ್ತವೆ. ಆಗ ನಮಗೆ ಮರೆವಿನ ಸಮಸ್ಯೆ ಎದುರಾಗುತ್ತದೆ. ಆದರೆ ಮಿದುಳಿಗೆ ಆ ನೆನಪು ಬೇಕಾದಾಗ ಮತ್ತೆ ಆ ನೆನಪಿನ ಜೀವಕೋಶವನ್ನು ಪರದೆಯ ಒಳಗೆ ಸೇರಿಸಿಕೊಂಡು ನೆನಪನ್ನು ಎಚ್ಚರಿಸುತ್ತದೆ.

ಪ್ರಸಂಗ ೨: ಚಿಕ್ಕ ಮಗುವಾಗಿದ್ದಾಗ ನೀವು ಸೈಕಲ್ ತುಳಿಯುವುದನ್ನು ಕಲಿತಿರುತ್ತೀರಿ. ನಂತರ ೧೦ ವರ್ಷಗಳ ಕಾಲ ಸೈಕಲ್ ತುಳಿದಿರುವುದಿಲ್ಲ. ತಕ್ಷಣ ನಿಮಗೆ ಸೈಕಲ್ ಕೊಟ್ಟಾಗ ಬಹಳ ಪರಿಣಿತರಂತೆ ಸೈಕಲ್ ತುಳಿಯುತ್ತೀರಿ. ಹೇಗಿದು ಸಾಧ್ಯ. ಇದೇ ನೀವು ಮೇಲೆ ನೋಡಿದ ವಿವರಣೆಯಲ್ಲಿ ತಿಳಿಯುವುದು. ಸೈಕಲ್ ತುಳಿಯುವ ಉಪಯುಕ್ತ ನೆನಪನ್ನು ಮಿದುಳು ಪುನರೆಚ್ಚರಿಸಿ ಕೆಲಸಕ್ಕೆ ಬಳಸಿಕೊಳ್ಳುತ್ತದೆ. ಇದೇ ಮಿದುಳಿನ ಅದ್ಭುತ ಶಕ್ತಿ.

ವಿಜ್ಞಾನಿಗಳು ಮಿದುಳಲ್ಲಿ ಮಾಹಿತಿ ಶೇಖರಣಾ ಕೋಶಗಳನ್ನು ಪತ್ತೆ ಹಚ್ಚಿದ್ದಾರೆ. ಇದು ನಾವು ನೀವೆಲ್ಲಾ ತಿಳಿದಿರುವ ಕಂಪ್ಯೂಟರ್‌ಗಳ ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್‌ನಂತೆ! ಒಮ್ಮೆ ಒಂದು ಪ್ರಸಂಗ ಮಿದುಳಲ್ಲಿ ಉಳಿದುಕೊಂಡಾಗ ಮಾಹಿತಿ ಸಂಗ್ರಹಣಾ ಜೀವಕೋಶಗಳು ಮಿದುಳಿನ ಪರದೆಗಳಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಅದನ್ನು ಏಷ್ಟೇ ವರ್ಷಗಳಾಗಲಿ, ಮಿದಳು ಅದನ್ನು ಬಳಸಿಕೊಂಡು ನೆನಪನ್ನು ಮೂಡಿಸುತ್ತದೆ. ಹಾಗಾಗಿ ನಾವು ಮರೆತೇ ಹೋಗಿದ್ದೇವೆ ಎಂದು ಅಂದುಕೊಳ್ಳುವುದು ಕೇವಲ ಅರ್ಧ ಸತ್ಯ. ನೆನಪು ಮಿದುಳಲ್ಲಿ ಎಂದೂ ಶಾಶ್ವತ ಹಾಗೂ ನಾಶವಾಗುವ ಪ್ರಶ್ನೆಯೇ ಇಲ್ಲದ್ದು.

ಬಳಕೆಯಾಗಿರುವುದು ಶೇ. ೧೦ ಅಷ್ಟೇ: ನೀವು ಒಂದು ವಿಷಯ ಕೇಳಿರಬಹುದು. ಭೌತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಮಿದುಳನ್ನು ಇನ್ನೂ ಸಂರಕ್ಷಿಸಿ ಎಲ್ಲೋ ಇಟ್ಟಿದ್ದಾರೆ ಎಂದು. ಅವರ ಮಿದುಳು ಬೇರೆಯವರ ಮಿದುಳಿಗಿಂತಾ ವಿಭಿನ್ನವಾಗಿತ್ತೆಂದೂ, ದೊಡ್ಡದಾಗಿತ್ತೆಂದು. ಇವೆಲ್ಲವೂ ಸತ್ಯ. ಮಿದುಳನ್ನು ಇನ್ನೂ ಸಂರಕ್ಷಿಸಲಾಗಿದೆ. ಆದರೆ ಆಲ್ಬರ್ಟ್ ಐನ್‌ಸ್ಟೀನ್ ಬುದ್ಧಿವಂತರಾಗಲು ದೊಡ್ಡ ಮಿದುಳ ಕಾರಣವಲ್ಲ. ಅವರು ಮಿದುಳಿನ ಹೆಚ್ಚು ಭಾಗವನ್ನು, ಜೀವಕೋಶಗಳನ್ನು ಬಳಸಿಕೊಂಡಿದ್ದರು. ವಿಜ್ಞಾನಿಗಳ ಪ್ರಕಾರ ಒಬ್ಬ ಸಾಮಾನ್ಯ ಮನುಷ್ಯ ಮಿದುಳಿನ ಕೇವಲ ಶೇ. ೫ ರಿಂದ ೮ ರಷ್ಟು ಭಾಗವನ್ನು ಮಾತ್ರ ಬಳಸಿಕೊಂಡಿರುತ್ತಾನೆ. ಅಂದರೆ ಮಿಕ್ಕ ಭಾಗ ಸಂಪೂರ್ಣ ಖಾಲಿ. ಬುದ್ಧಿವಂತರು ಶೇ. ೧೦ ಭಾಗ ಬಳಸಿಕೊಳ್ಳುತ್ತಾರೆ. ಇಷ್ಟು ಕಡಮೆ ಬಳಕೆಯಲ್ಲೇ ಮನುಷ್ಯ ಈಗಿನ ಎಲ್ಲ ಸಾಧನೆ ಮಾಡಿದ್ದಾನೆ. ಇನ್ನು ಪೂರ್ಣ ಬಳಕೆಯಾದರೆ? ವಿಸ್ಮಯವೇ ಆಗಬಹುದು. ವಿನಾಶವೂ ಆಗಬಹುದು. ಕೇಳಿದ್ದೀರಲ್ಲ, ವಿನಾಶ ಕಾಲೇ ವಿಪರೀತ ಬುದ್ಧಿ ಎಂದು. ಅಂದ ಹಾಗೆ ಐನ್‌ಸ್ಟೀನ್ ಮಿದುಳಿನ ಎಷ್ಟು ಭಾಗ ಬಳಸಿಕೊಂಡಿದ್ದರು ಗೊತ್ತೆ, ಬರೋಬ್ಬರಿ ಶೇ. ೩೦!